ಶುಕ್ರವಾರ, ಮೇ 25, 2012

ರಾಜನೀತಿ...

                                  ನಿಮ್ಮವ ನಾನು
ನಿಮಗಾಗಿ ನಾನು
ಗೆಲ್ಲಿಸಿರಿ ನೀವು
ಗುಲ್ಲೆಬ್ಬಿಸುವೆ ನಾನು
ಗಂಡಾಂತರದಲಿ ನೀವು
ಗಮ್ಮತ್ತಾಗಿರುವೆ ನಾನು

ನಿಮ್ಮೆಲ್ಲರ ವೋಟನು ಕೊಟ್ಟು ಗೆಲ್ಲಿಸಿರಿ
ನನ್ನ ಮಾಡಿ ನಿಮ್ಮ ವಾರಸುದಾರ
ನಾ ಸಾವಿರ ಭರವಸೆಯ ಸರದಾರ
ಆಗುವೆ ನಾ ನಿಮಗೆ ಅರಸ
ನಿಮ್ಮ ಏಳಿಗೆಗೆ ಶ್ರಮಿಸುವೆ ನಾನು
ಸ್ವಲ್ಪ ಜೇಬಿಗೆ ತಳ್ಳಿರಿ ನೀವು

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾನು
ಸಾವಿರ ಯೋಜನೆಯು ನಿಮ್ಮಯ ಹೆಸರಲ್ಲಿ
ಬೊಕ್ಕಸದ ಹಣವೆಲ್ಲ ಬಿಡುಗಡೆ ಮಾಡಿ
ದೊಡ್ಡ ಪಾಲು ನನಗೆ
ಸಣ್ಣ ಪಾಲು ನನ್ನ ಜೋತೆಯಲ್ಲಿರುವವರಿಗೆ
ಉಳಿದದ್ದು ಖಂಡಿತ ಹಂಚುವೆ ನಿಮಗೆ

ನಾ ನಿಮ್ಮ ಜಾತಿಯವನು
ನಿಮಗಾಗಿ ಸದಾ ಇರುವವನು
ನಿಮ್ಮ ಸೇವೆಯಲೇ ಸಂತಸ ಕಾಣುವವನು
ಎಂದೆಲ್ಲಾ ಹೇಳಿ ನಿಮ್ಮ ನಂಬಿಸಿ ನಾ
ಜಾತಿ ಮೀಸಲಾತಿಯ ಸಾಕಾರ ಮಾಡಿ
ಪೂರ್ಣ ಲಾಭವ ಮಾಡಿದವನು

ದೇಶವ ಕೈ ಮುಷ್ಟಿಯಲಿ ಕಟ್ಟಿಟ್ಟವನು
ಬೇಡ ಅಂದರು ಕುರ್ಚಿಯ ಬಿಡದವನು
ಹೊಸ ಹೊಸ ಹಗರಣವ ಪರಿಚಯಿಸುವನು
ಕಾಣದ ಕಪ್ಪು ಹಣವ ಸೃಷ್ಟಿಸಿದವನು
ಕೋಟಿ ಆಸ್ತಿಯ ಕೂಡಿಟ್ಟವನು
ಎಲ್ಲರ ಬಾಯನು ಮುಚ್ಚಿಸಿದವನು
(ರಾ.ಹೊ.)

ಭಾನುವಾರ, ಮೇ 13, 2012

ಇರಬೇಕು...

 ಸಪ್ತಪದಿ ತುಳಿದರಾಯಿತೇ,
ಸಂಸಾರವೆಂಬ ಸಾಗರದಲಿ
ಸುಲಭವಾಗಿ  ಇಜಲು ಗೊತ್ತಿರಬೇಕು

ಪ್ರೀತಿ ಮಾಡಿದರಯಿತೇ,
ಬಾಡಿದ ವದನದಲೂ ಮೂಗುತಿಯ
ಮೆರಗು ಮಾಸದಂತೆ ಇರಬೇಕು

ಮಾತು ಕೊಟ್ಟರಾಯಿತೇ,
ಮುಕ್ಕೋಟಿ ಕಷ್ಟಗಳು ಬಂದರೂ
ವಜ್ರದಂತೆ ಧ್ರಡತೆ ಮತ್ತು ಘನತೆ ಹೊಂದಿರಬೇಕು

ದೇವರಲಿ ವರವ ಬೇಡಿದರಾಯಿತೇ
ಆತ್ಮವು ಶರೀರದಲಿ ಅವಧ್ಯವಾದಂತೆ
ನಂಬಿಕೆಯು ಅಚಲವಾಗಿರಬೇಕು

ಸಂಭಂದವ ಮಾಡಿದರಯಿತೇ
ಅದು ಮುಂಜಾನೆಯಲಿನ ಇಬ್ಬನಿಯಂತೆ
ಶುಬ್ರ ಮನೋಹರವಾಗಿರಬೇಕು

ಜೀವವಿದ್ದರಾಯಿತೇ
ಇರುವಿಕೆಯು ಜೀವನಕೆ ಒಂದು
ಅರ್ಥ ಕೊಡುವಂತಿರಬೇಕು
(ರಾ.ಹೊ.)