ಸೋಮವಾರ, ಜುಲೈ 2, 2012

ಮಳೆಗಾಲವು ಮುದ ನೀಡಲಿ ನಿಮಗೆ...

ಪಡುವಣದಿ ಬರುತಿದೆ ಕಾರ್ಮೋಡಗಳು
ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
ಇದಕೆ ಹಾಂತೆಗಳ ನರ್ತನದ ಮೇರು

ಮಳೆ ಬಂದರೆ ನಮ್ಮೂರ ವೈಧ್ಯರಿಗೆ ಹಣದ ಕೊಯ್ಲೇ ಕೊಯ್ಲು
ಎಲ್ಲೆಂದರಲಿ ಬಣ್ಣ ಬಣ್ಣದ ಕೊಡೆಗಳದ್ದೆ ಕಾರು-ಬಾರು
ಆಟಿಯೆಂದರೆ ನಮ್ಮೊರ ಭಟ್ಟರಿಗೆ ಬರೀ ಬೋರು
ಅದುವೇ ಬೀದಿ ನಾಯಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು

ನಗರದಲ್ಲೋ ಟ್ರಾಫಿಕ್ ಜ್ಯಾಮೋ -ಜ್ಯಾಮ್
ಎಡೆಯಿಲ್ಲದೆ ಅಪಘಾತಗಳು ಸಾಲು ಸಾಲು
ರೋಡಿನಲಿ ಚರಂಡಿಯ ನೀರು ರಾಡಿ ಮಾಡಿ
ಜನ-ಜೀವನವು ಒಂದೇ ಮಳೆಯಲಿ  ಬುಡಮೇಲು

ಸಮುದ್ರ ರಾಜನ ಕೊನೆಯಿಲ್ಲದ ಘನ ಘೋರ ಶಂಖ ನಾದ
ತೋಟದಲ್ಲಿ ಗೊಂಕ್ರಕಪ್ಪೆಗಳ ಮೇಳ ಕೊಯ್ಯಂ ಕೊಟ್ರಂ
ಅಂಗಳದ ಕೊನೆಯಲ್ಲಿನ ಕೊಳೆಯಲ್ಲಿ ಟಿಸಿಲೊಡೆದ ಕಳೆ
ಕಂಬಳಿಯ ಕವಚ ತೊಟ್ಟು ನೇಗಿಲೆತ್ತಿ ಹೊರಟ ರೈತ

ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
(ರಾ.ಹೊ.)