ಭಾನುವಾರ, ಮೇ 13, 2012

ಇರಬೇಕು...

 ಸಪ್ತಪದಿ ತುಳಿದರಾಯಿತೇ,
ಸಂಸಾರವೆಂಬ ಸಾಗರದಲಿ
ಸುಲಭವಾಗಿ  ಇಜಲು ಗೊತ್ತಿರಬೇಕು

ಪ್ರೀತಿ ಮಾಡಿದರಯಿತೇ,
ಬಾಡಿದ ವದನದಲೂ ಮೂಗುತಿಯ
ಮೆರಗು ಮಾಸದಂತೆ ಇರಬೇಕು

ಮಾತು ಕೊಟ್ಟರಾಯಿತೇ,
ಮುಕ್ಕೋಟಿ ಕಷ್ಟಗಳು ಬಂದರೂ
ವಜ್ರದಂತೆ ಧ್ರಡತೆ ಮತ್ತು ಘನತೆ ಹೊಂದಿರಬೇಕು

ದೇವರಲಿ ವರವ ಬೇಡಿದರಾಯಿತೇ
ಆತ್ಮವು ಶರೀರದಲಿ ಅವಧ್ಯವಾದಂತೆ
ನಂಬಿಕೆಯು ಅಚಲವಾಗಿರಬೇಕು

ಸಂಭಂದವ ಮಾಡಿದರಯಿತೇ
ಅದು ಮುಂಜಾನೆಯಲಿನ ಇಬ್ಬನಿಯಂತೆ
ಶುಬ್ರ ಮನೋಹರವಾಗಿರಬೇಕು

ಜೀವವಿದ್ದರಾಯಿತೇ
ಇರುವಿಕೆಯು ಜೀವನಕೆ ಒಂದು
ಅರ್ಥ ಕೊಡುವಂತಿರಬೇಕು
(ರಾ.ಹೊ.)

3 ಕಾಮೆಂಟ್‌ಗಳು: